ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸುದ್ದಿ LOCAL NEWS

ಮಾತನಾಡುವ ಗೊಂಬೆ ಪುಸ್ತಕ : ಪ. ಗು. ಸಿದ್ದಾಪುರ

by 21 on | 2025-10-31 18:35:47

Share: Facebook | Twitter | Whatsapp | Linkedin | Visits: 61


ಮಾತನಾಡುವ ಗೊಂಬೆ ಪುಸ್ತಕ : ಪ. ಗು. ಸಿದ್ದಾಪುರ

ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬಸವನ ಬಾಗೇವಾಡಿ.


ಪುಸ್ತಕಗಳು ನಿತ್ಯ ಸತ್ಯವನ್ನು ಹೇಳುತ್ತವೆ ಆದ್ದರಿಂದ ನಾವು ಪುಸ್ತಕಗಳ ಸ್ನೇಹವನ್ನು ಮಾಡಬೇಕು ಪುಸ್ತಕಗಳು ನಶಿಸದ ಆಸ್ತಿಯಾಗಿದೆ ಈ ಅಮೂಲ್ಯವಾದ ಆಸ್ತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕೆಂದು ಮಕ್ಕಳ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ ಗು ಸಿದ್ದಾಪುರ ಅವರು ಹೇಳಿದರು.

        ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಐಕ್ಯೂ ಏ ಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಇಂದು ನನ್ನ ಮೆಚ್ಚಿನ ಪುಸ್ತಕ ಓದು ಮತ್ತು ಅವಲೋಕನ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಂತ್ರಜ್ಞಾನ ಬೆಳದಂತೆ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಓದು ಕಡಿಮೆಯಾದಂತೆ ಮಾನವ ಮಾನವೀಯತೆಯನ್ನು ಕಳೆದುಕೊಳ್ಳಬಹುದು ಪುಸ್ತಕಗಳು ಮಸ್ತಕದ ಹಸಿವನ್ನು ನೀಗಿಸುತ್ತವೆ ಮಾತನಾಡುವ ಗೊಂಬೆಗಳಾದ ಪುಸ್ತಕಗಳ ನ್ನಿಡಬೇಕೆಂದು ಅಭಿಪ್ರಾಯಪಟ್ಟರು.

    ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಸಾಹಿತಿಗಳಾದ ಶಂಕರ್ ಬೈಚಬಾಳ್ ಅವರು ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಸಂಯೋಜಕರು ಹಾಗೂ ಸದಸ್ಯರಾದ ಡಾ. ಕುಶಾಲ್ ಬರಗೂರು ಅವರು ಮಾತನಾಡಿದರು. ನನ್ನ ಮೆಚ್ಚಿನ ಪುಸ್ತಕ ಓದು ಮತ್ತು ಅವಲೋಕನದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯ ಎಂದರೆ ಕಾವೇರಿ ಲಕ್ಷ್ಮೀ ಅಂಬಿಕಾ ಯಮುನಾ ಅಶ್ವಿನಿ ರೇಖಾ ರುತುಜ ಸುನಿತಾ ಹಾಗೂ ಪೂರ್ಣಿಮಾ ಪ್ರಾಚಾರ್ಯರಾದ ಡಾಕ್ಟರ್ಪ್ರಾಚಾರ್ಯರಾದ ಡಾ ಎ ವ್ಹಿ ಸೂರ್ಯವಂಶಿ ಅವರು ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದರು ಕಾರ್ಯಕ್ರಮದಲ್ಲಿ ಎಲ್ಲ ಭೋದಕ ಬೋಧ ಕೇತರ ಸಿಬ್ಬಂದಿಯವರು ಹಾಜರಿದ್ದರು. ಡಾ ಬಿ ಎಮ್ ಸಾಲವಾಡಗಿ ಅವರು ಸ್ವಾಗತ ಮತ್ತು ಪರಿಚಯ  ಹಾಗೂ ಎಮ್ ಕೆ ಯಾದವ ನಿರೂಪಿಸಿದರು

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment