by 28 on | 2025-08-18 16:27:33 Last Updated by 28 on2026-04-18 18:11:29
Share: Facebook | Twitter | Whatsapp | Linkedin | Visits: 340
ಎಲ್ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾ – ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ "ನಷಾ ಮುಕ್ತ ಭಾರತ ಅಭಿಯಾನ್ – 2025" ಜಾಗೃತಿ ಕಾರ್ಯಕ್ರಮ
ಬಿಎಲ್ಡಿಇ ಸಂಸ್ಥೆಯ ನರ್ಸಿಂಗ್ ಮಹಾವಿದ್ಯಾಲಯ, ತಿಕೋಟಾದ ರಾಷ್ಟ್ರೀಯ ಸೇವಾ ಯೋಜನೆ ಘಟಕವು "ನಷಾ ಮುಕ್ತ ಭಾರತ ಅಭಿಯಾನ್ – 2025" ಅಡಿಯಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 18 ಆಗಸ್ಟ್ 2025 ರಂದು ಯಶಸ್ವಿಯಾಗಿ ಆಯೋಜಿಸಿತು.
ಈ ಅಭಿಯಾನವು ಯುವಜನತೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ನಶಾಮುಕ್ತ ಸಮಾಜ ನಿರ್ಮಿಸಲು ಪ್ರಧಾನ ಉದ್ದೇಶ ಹೊಂದಿದೆ.
ಕಾರ್ಯಕ್ರಮವು ಭಕ್ತಿಗೀತೆ ಮೂಲಕ ಆರಂಭವಾಗಿ, ನಂತರ ಅತಿಥಿಗಳ ಸ್ವಾಗತ, ದೀಪ ಪ್ರಜ್ವಲನೆ, ಅತಿಥಿಗಳ ಭಾಷಣದ ಮೂಲಕ ಸಾಗಿತು. ಪ್ರೇಮಾ ಕಂಬಳಿ (4ನೇ ಸೆಮಿಸ್ಟರ್ B.Sc. ನರ್ಸಿಂಗ್) ಅವರು ಭಕ್ತಿಗೀತೆಗೈದರು ಮತ್ತು ನಂದಿನಿ ಚವಾಣ್ (6ನೇ ಸೆಮಿಸ್ಟರ್ B.Sc. ನರ್ಸಿಂಗ್) ಅವರು ಸ್ವಾಗತ ಭಾಷಣವನ್ನಿತ್ತರು.
ಶ್ರೀ ಜೆ.ಎ. ವಾಘಮೋರೆ (ASI, ತಿಕೋಟಾ ಪೊಲೀಸ್ ಠಾಣೆ) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಮಾತನಾಡಿದರು. ಅವರು ಮಾದಕ ವಸ್ತುಗಳನ್ನು ಉಪಯೋಗಿಸಬೇಡಿ ಎಂಬ ಕಿವಿಮಾತು ನೀಡಿದರು ಮತ್ತು ಮಾದಕ ವ್ಯಸನದಿಂದ ದೇಹ, ಮನಸ್ಸು ಮತ್ತು ಸಮಾಜದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ತಿಳಿಸಿದರು.
ಪ್ರೊ. ಡಾ. ಪ್ರಕಾಶ್ ಸಿದ್ದಾಪೂರ, ಪ್ರಾಚಾರ್ಯರು, ಅವರು ಅಧ್ಯಕ್ಷತೆಯನ್ನು ವಹಿಸಿ ಮುಖ್ಯ ಅತಿಥಿಗೆ ಸ್ಮರಣಿಕೆ ನೀಡಿ ಗೌರವ ಸಲ್ಲಿಸಿದರು. ತಮ್ಮ ಭಾಷಣದಲ್ಲಿ ಅವರು ನಷಾ ಮುಕ್ತ ಅಭಿಯಾನದ ಮಹತ್ವವನ್ನು ವಿವರಿಸಿ, ಇದು ಕೇವಲ ಸರ್ಕಾರದ ಯೋಜನೆ ಮಾತ್ರವಲ್ಲದೆ, ಸಾಮಾಜಿಕ ಚಳವಳಿಯೂ ಆಗಿರುವುದಾಗಿ ಹೇಳಿದರು.
ಕಾರ್ಯಕ್ರಮವು "ನಶೆ ಇಲ್ಲದ ಭಾರತ, ಆರೋಗ್ಯವಂತ ಸಮಾಜ" ಎಂಬ ಘೋಷಣೆಯೊಂದಿಗೆ ಯಶಸ್ವಿಯಾಗಿ ಕೊನೆಗೊಂಡಿತು.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ