ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಶಿಕ್ಷಣ EDUCATION

ವಿಜಯಪುರ ನಗರದ ಜಲ ನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ

by 1 on | 2024-08-17 14:49:53

Share: Facebook | Twitter | Whatsapp | Linkedin | Visits: 2697


ವಿಜಯಪುರ ನಗರದ ಜಲ ನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ

ವಿಜಯಪುರ ನಗರದ ಜಲ ನಗರದಲ್ಲಿರುವ ಶ್ರೀ ಬಿ. ಎಂ. ಪಾಟೀಲ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹನವನ್ನು ನೆರವೇರಿಸಿ ಮಾತನಾಡಿದ ನಿವೃತ್ತ ಸೈನಿಕರಾದ ಶ್ರೀಯುತ ಸುಭಾಷ್ ಚಂದ್ರ ಚನ್ನಪ್ಪ ಸಜ್ಜನ್ ಅವರು ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ಅಭಿಮಾನ ಬರುವಂತ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಕೊಳ್ಳುವಂತ ಶಿಕ್ಷಣ ತಮಗೆಲ್ಲ ದೊರಕಲಿ ದೇಶದ ಸುಭದ್ರತೆಗೆ ಸೈನಿಕರು ಬಹಳ ಮುಖ್ಯ ಎಲ್ಲ ಮಕ್ಕಳಲ್ಲಿ ಭಾರತೀಯ ಸೈನ್ಯದ ಮೇಲೆ ಅಭಿಮಾನವಿರಲಿ ದೇಶದ ನಾಯಕರಾಗುವದರೊಂದಿಗೆ ಮೊದಲು ದೇಶ ಸೇವಕರಾಗಿ ಈ ಒಂದು ಒಳ್ಳೆಯ ಸಂದೇಶವನ್ನು ಈ ಶಾಲೆಯ ಶಿಕ್ಷಕರಿಂದ ಕಲಿತು ದೇಶದ ಅಭಿಮಾನಿಗಳಾಗಿ ಬೆಳೆಯಿರಿ ಸದೃಢ ಸಮಾಜ ಕಟ್ಟಲು ನಿಮ್ಮಂತ ಮಕ್ಕಳು ಒಳ್ಳೆಯ ಧ್ಯೇಯವನ್ನು ಹೊಂದಿ ನಾಡನ್ನು ಕಾಯುವ ಯೋಧರಾಗಿ ಎಂಬ ಕರೆಯನ್ನು ನೀಡಿದರು ನಂತರ ಮಕ್ಕಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹನೀಯರ ಬಗ್ಗೆ ಮಾತನಾಡಿದರು. ಶಿಕ್ಷಕರಾದ, ಸಂಗನಗೌಡ ಪಾಟೀಲ ಶಿಕ್ಷಕಿಯರಾದ, ಮೋಶಿನಾ ಜಾನೇಕಾಲ್ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಅನೇಕ ಮಹನೀಯರನ್ನು ನೆನೆದು ಭಾಷಣವನ್ನು ಮಾಡಿದರು. ಇದರೊಂದಿಗೆ ಮಕ್ಕಳ ಮನರಂಜನೆ ಕಾರ್ಯಕ್ರಮ ಬಹಳ ಗಮನ ಸೆಳೆಯಿತು. ಎಲ್ಲ ಮಕ್ಕಳು ಅತ್ಯಂತ ಉತ್ಸಾಹದಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದರು ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿತ್ತು.


ಕಿರು ನಾಟಕಗಳ ಮೂಲಕ, ನೃತ್ಯಗಳ ಮೂಲಕ ಸ್ವಾತಂತ್ರ್ಯ ಪೂರ್ವದ ವಾತಾವರಣವನ್ನು ಮಕ್ಕಳು ಮತ್ತೊಮ್ಮೆ ಎಲ್ಲರ ಕಣ್ಣ ಮುಂದೆ ತಂದರು. ಪ್ರಾಚಾರ್ಯರಾದ ಶ್ರೀಯುತ ದರ್ಶನ್ ಹುನಗುಂದ್ ಮಾತನಾಡಿ ದೇಶದ ಬಗ್ಗೆ ಅಭಿಮಾನವಿರಲಿ. ನೀವೆಲ್ಲರೂ ಶಿಸ್ತಿನ ಸಿಪಾಯಿಗಳಾಗಿರಿ ಎಂದು ಮಕ್ಕಳಿಗೆ ಕರೆ ನೀಡಿದರು. ಧ್ವಜಾರೋಹಣ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ನೆರವೇರಿತು. ಶಿಕ್ಷಣ ಸಂಯೋಜಕರಾದ ಫರಹದೆಬಾ ಜಹಾಗೀರ್ದಾರ್, ಶ್ರೀ ಸಂಗಮೇಶ್ ಪಟ್ಟಣಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಲ್ಲ ಶಿಕ್ಷಕ ವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.



Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment