ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ವಾಣಿಜ್ಯ LOCAL NEWS

ದುಬೈನಲ್ಲಿ ಪ್ರವಾಸದಲ್ಲಿರುವ ವಿಜಯಪುರದ ನಿವಾಸಿಗಳು ಜೈ ಶ್ರೀರಾಮ ಎಂದು ಸಂಭ್ರಮಿಸಿದರು.

by 1 on | 2024-01-22 17:11:33

Share: Facebook | Twitter | Whatsapp | Linkedin | Visits: 269


ದುಬೈನಲ್ಲಿ ಪ್ರವಾಸದಲ್ಲಿರುವ ವಿಜಯಪುರದ ನಿವಾಸಿಗಳು ಜೈ ಶ್ರೀರಾಮ ಎಂದು ಸಂಭ್ರಮಿಸಿದರು.

ಅಯೋಧ್ಯಯಲ್ಲಿ ಶ್ರೀರಾಮಚಂದ್ರನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆಗೊಂಡಿದ್ದೆ, ಎಲ್ಲೆಡೆ ಜೈ ಶ್ರೀರಾಮ ಘೋಷಣೆಗಳು ಮೊಳಗುತ್ತಿವೆ. ರಾಮಭಕ್ತರು ವಿವಿಧ ರೀತಿಯಲ್ಲಿ ಸಾಂಸ್ಕೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಸಂಭ್ರಮಿಸುತ್ತಿದ್ದಾರೆ.


ವಿಜಯಪುರ ಜಿಲ್ಲೆಯ ಜನರು ದುಬೈ ಪ್ರವಾಸ ಕೈಗೊಂಡಿರುವ ಸ್ಥಳದಲ್ಲಿಯೇ ಕೈಯಲ್ಲಿ ಧ್ವಜ ಹಿಡಿದು ರಾಮ ಮಂದಿರ ಲೋಕಾರ್ಪಣೆ ಕ್ಷಣಗಳನ್ನು ಆನಂದಿಸಿದ್ದಾರೆ. ವಿಜಯಪುರ ನಗರದ ಉದ್ಯಮಿ ಪ್ರಕಾಶ ಪಾಟೀಲ ಹಾಲಳ್ಳಿ ತಮ್ಮ ಪತ್ನಿ ಮಹೇಶ್ವರಿ ಪಾಟೀಲ, ಶರಣಪ್ಪ ಮೇಡೆದಾರ ಮತ್ತು ಸುಜಾತಾ ಮೇಡೆದಾರ, ಎಸ್. ಜಿ. ಕೋರಿ, ಸುಜಾತಾ ಕೋರಿ, ಶಿವಾನಂದ ಬ್ಯಾಕೋಡ, ವಿದ್ಯಾ ಬ್ಯಾಕೋಡ, ಜಿ. ಎಂ. ಸಿಂಧೂರ, ಮೈನಾ ಸಿಂಧೂರ, ರಾಜಶೇಖರ ಉಮದಿ ಮತ್ತು ಮಂಗಲಾ ಉಮದಿ ದಂಪತಿ ರಾಮಿ ರಿಜೆಟ್ ಪ್ಯಾಲೇಸ್ ಬಳಿ ಸೇರಿ ಸಂಭ್ರಮಿಸಿದ್ದಾರೆ.


ಭಾರತದಲ್ಲಿ ಇವರ ಸಂಬAಧಿಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ತಾವು ಭಾರತದಲ್ಲಿ ಇರದಿದ್ದರೇನಂತೆ ತಾವಿರುವ ಕಡೆಯಲ್ಲಿಯೇ ರಾಮ ಮಂದಿರ ಲೋಕಾರ್ಪಣೆ ದಿನವನ್ನು ಸ್ಮರಣೀಯವಾಗಿಸಿಕೊಳ್ಳಲು ಜೈ ಶ್ರೀರಾಮ ಘೋಷಣೆ ಹಾಕುವ ಮೂಲಕ ವಿದೇಶದಿಂದಲೇ ಸಂತಸ ವ್ಯಕ್ತಪಡಿಸಿದ್ದಾರೆ.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment