ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಶಿಕ್ಷಣ EDUCATION

*ಸಂಭ್ರಮದ ಕನ್ನಡ ರಾಜ್ಯೋತ್ಸವ*

by 31 on | 2025-11-01 13:30:55 Last Updated by 31 on2025-11-14 13:29:45

Share: Facebook | Twitter | Whatsapp | Linkedin | Visits: 39


*ಸಂಭ್ರಮದ ಕನ್ನಡ ರಾಜ್ಯೋತ್ಸವ*

ಬಿ.  ಎಲ್.  ಡಿ.  ಇ.  ಸಂಸ್ಥೆ ವಿಜಯಪುರದ ಜಲನಗರದಲ್ಲಿರುವ ಶ್ರೀ ಬಿ. ಎಂ ಪಾಟೀಲ್ ಪಬ್ಲಿಕ್ (ICSE) ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 70ನೆಯ ಕನ್ನಡ ರಾಜ್ಯೋತ್ಸವನ್ನು ಭವ್ಯವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗಣಾಧ್ಯಕ್ಷತೆಯನ್ನು ಶಾಲೆಯ ಪ್ರಾಚಾರ್ಯರಾದ ಶ್ರೀಯುತ ನವೀನ್ ಜಾರ್ಜ್ ಅವರು ವಹಿಸಿಕೊಂಡು ರಾಜ್ಯೋತ್ಸವದ ಕುರಿತು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಲೆಯ ಹಿರಿಯ ಸಂಯೋಜಕರಾದ ಶ್ರೀಮತಿ ಜಯಾ ಗಲಗಲಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಮಕ್ಕಳು ನೃತ್ಯಗಳನ್ನು ಮಾಡುವುದರ ಮೂಲಕ ಎಲ್ಲರ ಮನಸ್ಸನ್ನು ಮುಧಗೊಳಿಸಿದರು. ಮಕ್ಕಳೊಂದಿಗೆ ಶ್ರೀಯುತ ಫಕೀರಪ್ಪ ಮೊರಬದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಸ್ವಾಗತವನ್ನು ಶ್ರೀಯುತ ಸಂಗನಗೌಡ ಪಾಟೀಲ ಅವರು ನಿರ್ವಹಿಸಿದರು. ಶ್ರೀಯುತ ಮಂಜುನಾಥ್ ಪಾಟೀಲ ಅವರು ಕನ್ನಡ ಹಾಡು ನುಡಿಯ ಬಗ್ಗೆ ಹಾಗೂ ಗತ ಇತಿಹಾಸದ ಬಗ್ಗೆ ಸುಂದರವಾಗಿ ಮಾತನಾಡಿದರು. ಮಕ್ಕಳು ರಾಜ್ಯೋತ್ಸವ ಕುರಿತು ಮಾತನಾಡಿದರು ಜೊತೆಗೆ ಇಂದಿನ ಶುಭದಿನದ ವಿಶೇಷವಾದ ಶ್ರೀಯುತ ಬಿ ಎಂ ಪಾಟೀಲ್ ಸಾಹೇಬರ ಜನ್ಮ ದಿನಾಚರಣೆ ಇರುವುದರಿಂದ ಅವರ ಬಗ್ಗೆ ಶ್ರೀಮತಿ ಇಂದಿರಾ ಬಿದರಿ ಅವರು ಮಾತನಾಡಿದರು. ಕನ್ನಡ ನಾಡನ್ನು ಕುರಿತು ಮಕ್ಕಳು ಸುಂದರವಾಗಿ ಹಾಡಿದರು ಶಿಕ್ಷಕರು ಕೂಡ ಹಚ್ಚೇವು ಕನ್ನಡದ ದೀಪ ಶ್ರೀಮತಿ ಸುನಂದಾ ಘಾಟಿಗೆ ಅವರ ಸಹಯೋಗದಲ್ಲಿ ರಾಗಬದ್ಧವಾಗಿ ಹಾಡಿದರು. ಶ್ರೀಯುತ ರಾಹುಲ್ ಮಾನೆ ಅವರ ಸಹಯೋಗದಲ್ಲಿ ನೃತ್ಯ ಪ್ರದರ್ಶನ ಚೆನ್ನಾಗಿತ್ತು. ಶ್ರೀಯುತ ಸೋಮನಾಥ ಪಾಟೀಲ ಅವರ ಕೈ ಗರಡಿಯಲ್ಲಿ ಅರಳಿದ ಕರ್ನಾಟಕ ನಕ್ಷೆ  ಹಾಗೂ ಕನ್ನಡಾಂಬೆ ಚಿತ್ರ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂದಿದ್ದು ಕಾರ್ಯಕ್ರಮದ ಶರಣ ಸಮರ್ಪಣೆಯನ್ನು ಶ್ರೀಮತಿ ಇಂದುಮತಿ ಬಿರಾದಾರ ಅವರು  ನಿರ್ವಹಿಸಿದ್ದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment