ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಸುದ್ದಿ LOCAL NEWS

ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮ

by 20 on | 2026-02-16 20:30:01

Share: Facebook | Twitter | Whatsapp | Linkedin | Visits: 296


ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಹಿತ್ಯ ಉದ್ಘಾಟನೆ ಕಾರ್ಯಕ್ರಮ ಜರುಗಿತು

ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮ


ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ. ಇಡಿ) ಜಮಖಂಡಿಯಲ್ಲಿ ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ದಿ. 16-02-2026 ರಂದು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ ಬಿ ಎಲ್ ಡಿ ಇ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಉತ್ತಮ ವಡಾಗೋಲೆ ಯವರು ಆಗಮಿಸಿ, ಕನ್ನಡದ ಶ್ರೇಷ್ಠತೆ, ಕನ್ನಡ ಬೆಳೆದಿದ್ದು ಜೈನ ಸಾಹಿತ್ಯದಿಂದ ಹಾಗೂ ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ ಜೆ ಜೀರಗಾಳಿ ಯವರು ಸಾಹಿತ್ಯಕ್ಕೆ ಮೂಲ ಆಧಾರ ಭಾಷೆಯಾಗಿದೆ ಹಾಗೂ ಸಾಹಿತ್ಯದ ಬೆಳವಣಿಗೆ ಎಲ್ಲರಿಂದ ಸಾಧ್ಯ ಎಂದು ಅಧ್ಯಕ್ಷಿಯ ನುಡಿಗಳನ್ನು ಹೇಳಿದರು. ಪ್ರಶಿಕ್ಷಣಾರ್ಥಿಗಳಾದ ರಮೇಶ ಗೋಡಚಿ ಹಾಗೂ ಪ್ರಿಯಾಂಕ ಚಿನಗುಂಡಿ  ಅನಿಸಿಕೆ ವ್ಯಕ್ತಪಡಿಸಿದರು.

 ಪ್ರಾಯೋಗಿಕ ಪಾಠಶಾಲೆಗಳ ಮುಖ್ಯಸ್ಥರಾದ ಪ್ರೊ.ಎಲ್ ಎಮ್ ಮಾರ್ಕಪನಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೇಮಾನಂದ ಹಿರೇಮಠ, ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ಅಶ್ವಿನಿ ಅನಂತಪೂರ, ದೈಹಿಕ ನಿರ್ದೇಶಕರಾದ ಪ್ರೊ.ಮಹದೇವ ಗಲಬಿ, ಗ್ರಂಥ ಪಾಲಕರಾದ ಪ್ರೊ.ಯಮನಪ್ಪ ಕೋರಿ ಉಪಸ್ಥಿತರಿದ್ದರು.

 ಪ್ರಶಕ್ಷಣಾರ್ಥಿಗಳಾದ ದೇವಮ್ಮ ಪ್ರಾರ್ಥನೆ, ಸ್ವಾತಿ ಚಿಂಚಕಂಡಿ ಸ್ವಾಗತ, ಪವನ ಸದಲಗಿ ಪುಷ್ಪಾಪಣೆ, ಶಿವಪ್ರಸಾದ ಹುಣಸಿಕಟ್ಟಿ ಅತಿಥಿಗಳ ಪರಿಚಯ, ಉಮೇಶ ನ್ಯಾಮಗೌಡ ಹಾಗೂ ರೂಪ ಕಂಕನವಾಡಿ ನಿರೂಪಣೆ, ವಿಜಯಕುಮಾರ ಕಾಂಬಳೆ 

 ವಂದಿಸಿದರು.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment