by 20 on | 2026-02-16 20:30:01
Share: Facebook | Twitter | Whatsapp | Linkedin | Visits: 296
ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮ
ಪ್ರತಿಷ್ಠಿತ ಬಿ ಎಲ್ ಡಿ ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ. ಇಡಿ) ಜಮಖಂಡಿಯಲ್ಲಿ ಸಾಹಿತ್ಯ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ದಿ. 16-02-2026 ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಬಿ ಎಲ್ ಡಿ ಇ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಉತ್ತಮ ವಡಾಗೋಲೆ ಯವರು ಆಗಮಿಸಿ, ಕನ್ನಡದ ಶ್ರೇಷ್ಠತೆ, ಕನ್ನಡ ಬೆಳೆದಿದ್ದು ಜೈನ ಸಾಹಿತ್ಯದಿಂದ ಹಾಗೂ ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಕೆ ಜೆ ಜೀರಗಾಳಿ ಯವರು ಸಾಹಿತ್ಯಕ್ಕೆ ಮೂಲ ಆಧಾರ ಭಾಷೆಯಾಗಿದೆ ಹಾಗೂ ಸಾಹಿತ್ಯದ ಬೆಳವಣಿಗೆ ಎಲ್ಲರಿಂದ ಸಾಧ್ಯ ಎಂದು ಅಧ್ಯಕ್ಷಿಯ ನುಡಿಗಳನ್ನು ಹೇಳಿದರು. ಪ್ರಶಿಕ್ಷಣಾರ್ಥಿಗಳಾದ ರಮೇಶ ಗೋಡಚಿ ಹಾಗೂ ಪ್ರಿಯಾಂಕ ಚಿನಗುಂಡಿ ಅನಿಸಿಕೆ ವ್ಯಕ್ತಪಡಿಸಿದರು.
ಪ್ರಾಯೋಗಿಕ ಪಾಠಶಾಲೆಗಳ ಮುಖ್ಯಸ್ಥರಾದ ಪ್ರೊ.ಎಲ್ ಎಮ್ ಮಾರ್ಕಪನಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದ ವೇದಿಕೆಯ ಮೇಲೆ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರೇಮಾನಂದ ಹಿರೇಮಠ, ರೆಡ್ ಕ್ರಾಸ್ ವಿಭಾಗದ ಮುಖ್ಯಸ್ಥರಾದ ಪ್ರೊ.ಅಶ್ವಿನಿ ಅನಂತಪೂರ, ದೈಹಿಕ ನಿರ್ದೇಶಕರಾದ ಪ್ರೊ.ಮಹದೇವ ಗಲಬಿ, ಗ್ರಂಥ ಪಾಲಕರಾದ ಪ್ರೊ.ಯಮನಪ್ಪ ಕೋರಿ ಉಪಸ್ಥಿತರಿದ್ದರು.
ಪ್ರಶಕ್ಷಣಾರ್ಥಿಗಳಾದ ದೇವಮ್ಮ ಪ್ರಾರ್ಥನೆ, ಸ್ವಾತಿ ಚಿಂಚಕಂಡಿ ಸ್ವಾಗತ, ಪವನ ಸದಲಗಿ ಪುಷ್ಪಾಪಣೆ, ಶಿವಪ್ರಸಾದ ಹುಣಸಿಕಟ್ಟಿ ಅತಿಥಿಗಳ ಪರಿಚಯ, ಉಮೇಶ ನ್ಯಾಮಗೌಡ ಹಾಗೂ ರೂಪ ಕಂಕನವಾಡಿ ನಿರೂಪಣೆ, ವಿಜಯಕುಮಾರ ಕಾಂಬಳೆ
ವಂದಿಸಿದರು.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ