ಕೈಯೊಡ್ಡಿ ಪ್ರಸಾದವ ಕೊಂಡಡೆ ಕರ್ಮಧಾರಿ. ಶೇಷಪ್ರಸಾದವನಾಯ್ದು ಕೊಂಡಡೆ ವರ್ಮಹೀನ. ಉಕ್ಕುಳಪ್ರಸಾದವ ಕೊಂಡಡೆ ಸತ್ಕ್ರೀಗೆ ಸಲ್ಲ. ಇಂತಿವನರಿದು ಸಜ್ಜನಪ್ರಸಾದವ ನಿರ್ಧರದಿಂದ ಕೊಂಬ ಮಹಾಪ್ರಸಾದಿಯ ಕಾರುಣ್ಯವೆನಗೆಂದಿಗೆ ಸಾಧ್ಯವಪ್ಪುದು ? ಕುಂಭೇಶ್ವರಲಿಂಗದಲ್ಲಿ ಜಗನ್ನಾಥವವರಿದವಂಗಲ್ಲದೆ ಸಾಧ್ಯವಲ್ಲ
ಜಿಲ್ಲೆ ವಿಜಯಪುರ

ತಾಯಿಯ ಎದೆಹಾಲು ವಂಚಿತ ನವಜಾತ ಶಿಶುಗಳಿಗೆ ಬಿ.ಎಲ್.ಡಿ. ಇ ಆಸ್ಪತ್ರೆಯ ಅಮೃತಾಧಾರೆ ಕೇಂದ್ರದಿಂದ ತಾಯಿ ಹಾಲು ವಿತರಣೆ.

by 1 on | 2024-09-17 11:43:38

Share: Facebook | Twitter | Whatsapp | Linkedin | Visits: 316


ತಾಯಿಯ ಎದೆಹಾಲು ವಂಚಿತ ನವಜಾತ ಶಿಶುಗಳಿಗೆ ಬಿ.ಎಲ್.ಡಿ. ಇ ಆಸ್ಪತ್ರೆಯ ಅಮೃತಾಧಾರೆ ಕೇಂದ್ರದಿಂದ ತಾಯಿ ಹಾಲು ವಿತರಣೆ.

ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಪ್ರಾರಂಭವಾಗಿರುವ ಅಮೃತಾಧಾರೆ ತಾಯಿಹಾಲು ಕೇಂದ್ರದಿಂದ ಸಾವಿರಾರು ತಾಯಿಯ ಎದೆಹಾಲು ವಂಚಿತ ನವಜಾತ ಶಿಶುಗಳಿಗೆ ತಾಯಿ ಹಾಲು ಪೂರೈಸಲಾಗುತ್ತಿದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದರು.


ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಕಳೆದ ವರ್ಷ 2023ರ ಏಪ್ರೀಲ್ 7 ರಿಂದ ಇಲ್ಲಿಯವರೆಗೆ ಅಮೃತಧಾರೆ ತಾಯಿ ಎದೆ ಹಾಲಿನ ಕೇಂದ್ರದ ಮೂಲಕ ನವಜಾತ ಶಿಶುಗಳಿಗೆ ಸುರಕ್ಷಿತ ಮತ್ತು ಪೌಷ್ಟಿಕ ಎದೆಹಾಲು ಒದಗಿಸುತ್ತಿದೆ. ಈ ಮೂಲಕ ತಾಯಂದಿರಿಂದ ಸಾಕಷ್ಟು ಎದೆ ಹಾಲು ಪಡೆಯಲು ಸಾಧ್ಯವಾಗದ ಶಿಶುಗಳಿಗೆ ಎದೆ ಹಾಲಿನ್ನು ಪೂರೈಸಲಾಗುತ್ತಿದೆ.  ಪ್ರತಿಯೊಂದು ಮಗುವಿಗೆ ತಾಯಿಯ ಎದೆಹಾಲು ಅಮೃತವಿದ್ದಂತೆ.  ಕನಿಷ್ಠ ಆರು ತಿಂಗಳವರೆಗೆ ಮಗುವಿಗೆ ತಾಯಿಯ ಎದೆಹಾಲು ಬೇಕು.  ಹೀಗಾಗಿ ಎದೆಹಾಲು ಹೆಚ್ಚಿರುವ ತಾಯಂದಿರು ಹಾಲು ದಾನ ಮಾಡಬಹುದು.  ಇದರಿಂದ ದಾನ ಮಾಡುವ ತಾಯಂದಿರ ಆರೋಗ್ಯವೂ ಉತ್ತಮವಾಗಿರುತ್ತದೆ.  ಅಲ್ಲದೇ, ಮಕ್ಕಳ ಆರೋಗ್ಯವು ಚೇತರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.


ಈ ಕೇಂದ್ರದಿಂದ 1750ಕ್ಕೂ ಹೆಚ್ಚು ಶಿಶುಗಳಿಗೆ ತಾಯಿಯ ಎದೆಹಾಲು ಪೂರೈಸಲಾಗಿದ್ದು, ಆ ಮಕ್ಕಳು ಆರೋಗ್ಯದಿಂದ ಇವೆ.  ಎದೆಹಾಲು ದಾನ ಮಾಡುವ ತಾಯಂದಿರ ಹಾಲನ್ನು ನಾನಾ ಸೋಂಕು ಪರೀಕ್ಷೆ ನಡೆಸಲಾಗುತ್ತದೆ.  ನಂತರ ಉಚಿತವಾಗಿ ಈ ಹಾಲನ್ನು ಅಗತ್ಯವಿರುವ ಮಕ್ಕಳಿಗೆ ವಿತರಿಸಲಾಗುತ್ತಿದೆ ಎಂದರು.


ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ. ಬಿ. ಪಾಟೀಲ ಅವರ ಜನಪರ ಸೇವೆಯ ಫಲವಾಗಿ ಆಸ್ಪತ್ರೆಯಲ್ಲಿ ಅಮೃತಧಾರೆ ತಾಯಿ ಎದೆಹಾಲು ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ.  ವಿಜಯಪುರ ಜಿಲ್ಲೆಯ ಸಾರ್ವಜನಿಕರು ಮಕ್ಕಳಶಾಸ್ತ್ರವಿಭಾಗದ ಅಮೃತಧಾರೆ ತಾಯಿ ಹಾಲು ಕೇಂದ್ರದ ಬಗ್ಗೆ ಜನರು ತಿಳಿದುಕೊಂಡು ಇಲ್ಲಿನ ಸೇವೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಎಂ. ಎಂ. ಪಾಟೀಲ ಅವರು ಮನವಿ ಮಾಡಿದ್ದಾರೆ.

Search
Popular News
Most Popular
ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಅಲೆನ್ ಕರಿಯರ್ ಅಕಾಡೆಮಿ ಮಧ್ಯೆ ಶೈಕ್ಷಣಿಕ ಓರಿಯಂಟೇಶನ್ ಕಾರ್ಯಕ್ರಮದ ಕ್ಷಣಗಳು.
Vachana Pitamaha P. G. Halakatti College of Engineering
Nursing College Jamkhandi
BLDEA Nursing College Vijayapura
Vachana Pitamaha P. G. Halakatti College of Engineering Vijayapura
ಡಾ ಫ ಗು ಹಳಕಟ್ಟಿ, ಬಂಥನಾಳ ಶಿವಯೋಗಿಗಳು, ಡಾ ಬಿ ಎಂ ಪಾಟೀಲ್ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ

Leave a Comment