by 27 on | 2025-04-02 11:09:18
Share: Facebook | Twitter | Whatsapp | Linkedin | Visits: 377
ಆಯ್ ಕ್ಯೂ ಎ ಸಿ (IQAC) ಉಪಕ್ರಮದಡಿ ಸಂಸ್ಕೃತಿಕ ಸಮಿತಿ, ಮಹಿಳಾ ಸಬಲೀಕರಣ ಘಟಕ ಮತ್ತು ಬಿ.ಕಾಂ. ವಿಭಾಗ ಸಂಯುಕ್ತವಾಗಿ "ಎ .ಎಸ್. ಪಿ ಉಗಾದಿ ಉತ್ಸವ 2025" ಕಾರ್ಯಕ್ರಮವನ್ನು ವಿಜೃಂಭಣೆಯಿಂದ 28-03-2025 ರಂದು ಮಹಾವಿದ್ಯಾಲದ ಆವರಣದಲ್ಲಿ ಆಯೋಜಿಸಲಾಯಿತು. ಎಲ್ಲ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಪಾರಂಪರಿಕ ವೇಷಭೂಷಣದಲ್ಲಿ ಭಾಗವಹಿಸಿದರು. ಮಹಿಳೆಯರು ಕರ್ನಾಟಕದ ಸಾಂಸ್ಕೃತಿಕ ಸಂಕೇತವಾಗಿರುವ ಇಳಕಲ್ ಸೀರೆ ಧರಿಸಿ ಕಂಗೊಳಿಸಿದರು, ಪುರುಷರು ಅಂಗಿ ಮತ್ತು ಪಂಚೆ ತೊಟ್ಟು ಮಿಂಚಿದರು . ಪೀಳಿಗೆಯಿಂದ ಪೀಳಿಗೆ ನಮ್ಮ ಪಾರಂಪರಿಕ ಸಂಸ್ಕೃತಿಯನ್ನು ಉಳಿಸಬೇಕು ಎಂಬ ಉದ್ದೇಶದಿಂದ ಕಾಲೇಜನ್ನು ಹಳ್ಳಿಯ ಶೈಲಿಯಲ್ಲಿ ಅಲಂಕರಿಸಲಾಯಿತು. ಹೊಲಗುಂಡಿಗಳು, ಬಣ್ಣಬಣ್ಣದ ಮಂಡಪ್ಪ, ತೋರಣಗಳು, ಹಸಿರು ಪಲ್ಲಕ್ಕಿ, ಹಗ್ಗದ ಸ್ವಾಗತದ್ವಾರ ಇವೆಲ್ಲುವುಗಳಿಂದ
ಮಹಾವಿದ್ಯಾಲದ ಪರಿಸರ ಕಂಗೊಳಿಸಿತು .
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಚಿದಾನಂದ ಹಿರೇಮಠ ಸ್ವಾಮೀಜಿ ಭಾಗವಹಿಸಿದರು. ತಮ್ಮ ಆಧ್ಯಾತ್ಮಿಕ ಪ್ರವಚನದ ಮೂಲಕ, ಅವರು ವಿದ್ಯಾರ್ಥಿಗಳಿಗೆ ಜೀವನದ ನೈತಿಕ ಮೌಲ್ಯಗಳು, ಸಂಸ್ಕೃತಿಯ ಮಹತ್ವ ಮತ್ತು ಧರ್ಮದ ತಾತ್ತ್ವಿಕ ಅಂಶಗಳನ್ನು ವಿವರಿಸಿದರು. ಉಗಾದಿ ಹಬ್ಬ ಹೊಸ ವರ್ಷಾರಂಭದ ಸಂಕೇತವಾಗಿದ್ದು, ಇದು ಭವಿಷ್ಯದಲ್ಲಿನ ಸದುದ್ದೇಶಗಳಿಗಾಗಿ ಉತ್ತಮ ಸಮಯ ಎಂದು ಸ್ವಾಮೀಜಿಯವರು ತಮ್ಮ ಉಪನ್ಯಾಸದಲ್ಲಿ ಉಲ್ಲೇಖಿಸಿದರು.
ಈ ಮಹಾ ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಿ.ಎಸ್. ಬೆಳಗಲಿ ವಹಿಸಿಕೊಂಡರು. ಕಾರ್ಯಕ್ರಮ ಸಂಯೋಜಕಿ ಶ್ರೀಮತಿ ರಶ್ಮಿ ಎಸ್. ಪಾಟೀಲ್, ಶ್ರೀ ವಿ.ಎಸ್. ತಳವಾರ (ವಾಣಿಜ್ಯ ವಿಭಾಗದ ಮುಖ್ಯಸ್ಥರು), ಡಾ. ಭಾರತಿ ಮಠ (COE), ವಿದ್ಯಾರ್ಥಿ ಸಂಯೋಜಕರಾದ ಶಶಾಂಕ್ ದೇಸಾಯಿ ಮತ್ತು ಪ್ರೀತಿ ಬಶೋರಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ